ಪ್ರತೀಕ್ಷೆ
Sunday, March 28, 2010
ಆನಂದ
ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆತು೦ಬಿದ ಬಯಲು
ಇಳಿದಿದ್ದೇನೆ
ಆರಿಸಿ ಕೊಯ್ಯಲು
ಕಣಜ ತುಂಬಿದ ನಂತರ
ಹದವರಿತು ಬಿತ್ತಲು!
(೦೩-೦೪-೦೫ರ 'ಕರ್ಮವೀರ'ದಲ್ಲಿ ಪ್ರಕಟವಾಗಿದೆ.)
ನಿರ್ಲಿಪ್ತ
ಸೆಣಸುವೆ ಏಕೆ
ಅವಿರತ
ನನ್ನ ಮೇಲಿನ ಜಯಕ್ಕಾಗಿ
ಜಯ, ಅಪಜಯ
ಅಪ್ರಸ್ತುತ
ನಾನೀಗ...
ತಟಸ್ಥ!
( ಏಪ್ರಿಲ್
೨೦೦೩ 'ಮಯೂರ'ದಲ್ಲಿ ಪ್ರಕಟವಾಗಿದೆ.)
ವೈರುಧ್ಯ
ಜನಜಂಗುಳಿಯ ನಡುವೆ
ಬಿದ್ದಿರುವ ರಸ್ತೆ
ಒಂಟಿ, ಮೌನಿ.
ಜನರ ತನ್ನತ್ತ ಸೆಳೆವ
ಸಾಗರದ್ದೋ
ಎದ್ದೆದ್ದು ಅಲೆಗಳ ಅಟ್ಟುವ
ಅಬ್ಬರವೋ ಅಬ್ಬರ!
(ದೀಪಾವಳಿ ಸಂಚಿಕೆ-೨೦೦೪ರ 'ಮಂಗಳ'ದಲ್ಲಿ ಪ್ರಕಟವಾಗಿದೆ.)
Newer Posts
Home
Subscribe to:
Posts (Atom)