ಚಿಗುರಿ ಮೇಲೇರ ಹೊರಟಲ್ಲೆಲ್ಲಾ
ಬಂದೆರಗುವ ಕಲ್ಲು
ಮತ್ತೆ ಮೇಲೇರಿ ಭುವಿಯನೇ
ಬಿಡುವುದೇನೋ ಎಂಬ ಗುಲ್ಲು
ಅತ್ತಿತ್ತ ಟಿಸಿಲೊಡೆಯ ಹೊರಟರೂ
ಜರುಗುವ ತುಳಿತ
ಉಸಿರೊ೦ದನುಳಿಸಿ ಬೇರೆಲ್ಲ ಶಕ್ತಿಯ
ಕಸಿಯುವ ಶಪಥ
ತನ್ನ ಪರಿಧಿಯಿ೦ದ ಹೊರಬರಲಾರದೆ
ಒಳಗೂ ತೃಪ್ತಿ ಕಾಣದೆ
ಅಲ್ಲೇ ಸುತ್ತೆಲ್ಲಾ ಆಳ ಆಳಕೆ
ಬೇರಿಳಿಸಿ ಭದ್ರಗೊಳಿಸುತ್ತಾ
ಒ೦ದಾದರೂ ಅವಕಾಶ ಸಿಕ್ಕರೆ
ಆಕಾಶಕ್ಕೇರುವೆನೆ೦ದು ಪರಿತಪಿಸುತ್ತಾ
ಭೂತದಲೇ ಲೀನವಾಗುತ್ತಾ
ಭವಿಷ್ಯತ್ತನು ಕನಸುತ್ತಾ
ಕಳವಳಗೊಳ್ಳುವ
ತನ್ನ ತಾನೇ ಕನಿಕರಿಸುವ
ಆತ್ಮಾನುಕ೦ಪಿ!
('ಗರಿಕೆ'ಗೆ ಗುಡಿಬ೦ಡೆ ಪೂರ್ಣಿಮಾ ಬಹುಮಾನ ಲಭಿಸಿದೆ ಮತ್ತು ಇದೇಕವನವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯವರು ಹೊರತರುವ ಕವಿತೆ -೨೦೦೦ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.)
ಪ್ರಭಾಮಣಿಯವರೆ,
ReplyDeleteಒಂದು ಪ್ರತಿಮೆಯ ಸುತ್ತ ಕಿರುಕವನ ಹೆಣೆಯುವ ನಿಮ್ಮ ಪ್ರತಿಭೆ ಮೆಚ್ಚುವಂತಹದು.
ನಿಮಗೆ ಅಭಿನಂದನೆಗಳು.
Nice!
ReplyDelete@ಸೀತಾರಾಮ ಕೆ ಯವರೇ,
ReplyDeleteನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ 'ಗರಿಕೆ' ಗೆ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.
@ಸುನಾಥ್ ರವರೆ,
ReplyDeleteನಿಮ್ಮ ಅಮೂಲ್ಯ ಪ್ರೂತ್ಸಾಹಕರ ಪ್ರತಿಕ್ರಿಯೆಯಿ೦ದ ಉತ್ಸಾಹಿತಳಾಗಿದ್ದೀನೆ. ಧನ್ಯವಾದಗಳು. ಆಗಾಗ ಬರುತ್ತಿರಿ.