ಆಸರೆ
ನನ್ನಾಂತರ್ಯಕೆ
ಸಾಂತ್ವನ ನೀಡಿ
ಮುನ್ನಡೆಸುತ್ತಿದ್ದ
ಸಾಥಿ ನೀನು
ದಬ್ಬಿ ಹೊರ
ದೂಡದಿರು
ಮತ್ತೊಮ್ಮೆ
ತಬ್ಬಲಿಯಾಗುವೆನೆಂಬ
ಭಯವಿದೆ!
ಈವರೆಗೆ ಒಂದಾದರೂ ಫಲವನ್ನು ಬಿಡಲಾಗದ ಪುಷ್ಪಭರಿತ ಪಪ್ಪಾಯಿಗೆ ಪ್ರಕೃತಿಯ ಹಸಿರುಡುಗೆ :)
ನಾನು-ನೀನು
ನಾನು ನೀನಾದಾಗ
ಸಕಲ ಕಾರ್ಯಗಳೂ
ಫಲಿತ
ಸಮತೋಲಿತ,
ನಾನು ನಾನೇ ಆದಾಗ
ಅಬ್ಬರದ ಉಬ್ಬರ
ಎಣೆಯಿಲ್ಲದಿಳಿತ
ಆಗಾಗ ಸ್ಥಗಿತ!
ಅ೦ದಿನ ಬರಹ ಇ೦ದಿನ ಓದಿಗೆ::)21-05-2006ರ 'ಕರ್ಮವೀರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಗೊಮೆಯ ಸುತ್ತಮುತ್ತ' :)