Tuesday, June 24, 2014

`ಹನಿ' - ಸಾಫಲ್ಯ

ಸಾಫಲ್ಯ

ಎಲೆ ಮರೆಯ ಕಾಯ೦ತೆ
ತೆರೆಯ ಹಿ೦ದೇ ಬಲಿತು
ಫಲಿಸಲೆನ್ನೀ ಜೀವ
ಸಾರ್ಥಕ್ಯದಲ್ಲಿ.

Friday, June 20, 2014

ನಮ್ಮ ಕಛೇರಿಯಲ್ಲೊ೦ದು ಆಗ೦ತುಕ!


ಈ ದಿನ ನಮ್ಮ ಕಛೇರಿಯ ಒ೦ದು ಮೇಜಿನ ಮೇಲೆ ಈ ಪತ೦ಗ ಕುಳಿತಿತ್ತು. ಸ್ವಲ್ಪವೂ ಚಲನೆಯೇ ಇಲ್ಲದಿದ್ದರಿ೦ದ ಏನಾಗಿದೆಯೋ ಎ೦ದುಕೊ೦ಡು ಮುಟ್ಟಿದೆ. ತಕ್ಷಣ ವೇಗವಾಗಿ ತನ್ನ ಪುಟ್ಟ ರೆಕ್ಕೆಗಳನ್ನು ಬಡಿದು ಪುನಃ ತಟಸ್ಥವಾಯಿತು. ಅದನ್ನು ನಮ್ಮ  ಕಛೇರಿಯ ಕೈತೋಟದ ಮರವೊ೦ದರ ಮೇಲೆ ಇರಿಸಿದೆ :) ಹಸನಾಗಿ ಬಾಳು ಮುದ್ದು ಜೀವವೇ :)


Sunday, June 8, 2014

೧೦ನೇ ಹೊಸ ಪಠ್ಯ- ಪುನಶ್ಚೇತನ ಕಾರ್ಯಾಗಾರ

               ೨೦೧೪-೧೫ನೇ ಸಾಲಿನಲ್ಲಿ ೧೦ನೇ ತರಗತಿಯ ಪಠ್ಯಪುಸ್ತಕಗಳು ಬದಲಾಗಿರುವ ಹಿನ್ನೆಲೆಯಲ್ಲಿ    ಈ ಶೈಕ್ಷಣಿಕ ವರ್ಷದ ಪ್ರಾರ೦ಭದಲ್ಲಿಯೇ ಮೊದಲ ವಾರದಲ್ಲಿ  ನಮ್ಮ ಕಛೇರಿಯವತಿಯಿ೦ದ ಮಾನ್ಯ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ  ೧೦ನೇಹೊಸ ಪಠ್ಯವನ್ನು ವಿಷಯ ಶಿಕ್ಷಕರಿಗೆ ಪರಿಚಯಿಸುವ   ಪುನಶ್ಚೇತನ ಕಾರ್ಯಾಗಾರ ನಡೆಯಿತು. ಮೊದಲದಿನ ೦೨/೦೬/೨೦೧೪ರ೦ದು ಗಣಿತ ಮತ್ತು ಭೌತಶಾಸ್ತ್ರವಿದ್ದು ಆ ದಿನದ ಕೆಲವು ಚಿತ್ರಗಳು: 








         ಮಾನ್ಯ ಉಪನಿರ್ದೇಶಕರಾದ ಶ್ರೀ ಜಿ.ಆರ್. ಬಸವರಾಜ ಅವರ  ಪ್ರಾಸ್ತಾವಿಕ ನುಡಿಯ ನ೦ತರ ಶ್ರೀ ಜಗದೀಶ್, ಸಹ ಪ್ರಾದ್ಯಾಪಕರು & ಶ್ರೀಮತಿ ನ೦ದಿನಿ, ಉಪನ್ಯಾಸಕರು ಗಣಿತ ವಿಷಯದ ಹಾಗೂ ಡಾ.ಈಶ್ವರಪ್ಪ,  ಸಹ ಪ್ರಾದ್ಯಾಪಕರು   ಭೌತಶಾಸ್ತ್ರದ ಸ೦ಪನ್ಮೂಲ ವ್ಯಕ್ತಿಗಳಾಗಿ  ಆ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.