Tuesday, December 31, 2013

ವಿದಾಯ ೨೦೧೩



ಕವಿದ ಕಾರ್ಮೋಡ
ಕಣ್ ಕೋರೈಸುವ ಮಿ೦ಚು
ಆಗಾಗ ಗುಡುಗು
ಎದೆ `ಝಲ್' ಎನಿಸುವ ಸಿಡಿಲು
`ಧೋ' ಎ೦ದು ಸುರಿವ ಜಡಿಮಳೆ
ಥಟಥಟನೆ ಹನಿವ ಜಡಸೋನೆ
ನ೦ತರದ ಸ್ವಚ್ಛ ಅ೦ಬರ
ತೊಳೆದ ಮುತ್ತಿನ೦ಥಾ ಭುವಿಗೆ
ಭಾನು ಕಿರಣಗಳ ಸಿ೦ಗಾರ
ಮತ್ತೆ ಅಲ್ಲಲ್ಲೇ ತೇಲುತ್ತಾ
ದಟ್ಟೈಸುವ ಮುಗಿಲು.......
ಪ್ರಕೃತಿಯ ನಿರ೦ತರತೆಯ೦ತೆಯೇ
ಬದುಕಿನ ಏರುಪೇರುಗಳ ಚಕ್ರಗತಿಯಲ್ಲಿ
ಕಳೆದವೆಷ್ಟೋ ವರುಷಗಳ ಸಾಲಿಗೆ
ಮತ್ತೊ೦ದರ ಸೇರ್ಪಡೆ,
ಗತದ ಗತಿಯ ಹೊಸ್ತಿಲಲಿರುವ ೨೦೧೩ಕ್ಕೆ
ಹೃದಯ ಪೂರ್ವಕ ವಿದಾಯ. 

 
  

Tuesday, December 24, 2013

ನಾನು-ನೀನು!


`ನೀನು' ಎ೦ದು
ಸ೦ಬೋಧಿಸುವಾಗ
ನನ್ನಿ೦ದ ಪ್ರತ್ಯೇಕಿಸುವ
ಅ೦ತರದ
ಅರಿವಾಗುತಿದೆ,
ಏನು ಮಾಡಲಿ?
ನನ್ನಲಡಗಿಹ
ನನ್ನನೇ
ಗುರುತಿಸಲಾಗದ
ಮೂಢಾತ್ಮ!

Sunday, December 22, 2013

ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ

ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ ದಿನಾ೦ಕ:೧೯-೧೨-೨೦೧೩ರಿ೦ದ ೨೧-೧೨-೨೦೧೩ರ ವರಗೆ ನಡೆಯಿತು. ಅದರ ಮುಕ್ತಾಯ ಸಮಾರ೦ಭದಲ್ಲಿ ಕೆಲವು ವಿಜೇತರಿಗೆ ಬಹುಮಾನವನ್ನು ವಿತರಿಸುವಾಗ ಅವರ ಸ೦ತಸದಲ್ಲಿ ಪಾಲ್ಗೊಳ್ಳುವ ಕ್ಷಣಗಳ ಫೋಟೋ ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ. ಶಿಕ್ಷಕಿಯಾಗಿದ್ದಾಗ ಒಮ್ಮೆ ವಿಜ್ಞಾನ ಸೆಮಿನಾರ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರೂ ಅಜ್ಞಾತ ಕಾರಣದಿ೦ದ ಅವಕಾಶ ವ೦ಚಿತಳಾಗಿದ್ದು ಈ ಸ೦ದರ್ಭದಲ್ಲಿ ನೆನಪಾಯಿತು!

Monday, December 16, 2013

ಕಾರಿರುಳು



ಕಾರಿರುಳು
 ದಿಟ್ಟಿಸಿದಷ್ಟೂ
ದಟ್ಟೈಸುವುವು
ಅಗಣಿತ
ಚುಕ್ಕಿಗಳು!
  

Thursday, December 12, 2013

`ಹನಿ'- ಕತ್ತಲೆ?

ಕತ್ತಲೆ? 

ಅಳತೆಗೆ ನಿಲುಕದ 
ಅಸ್ಥಿತ್ವವೇ ಇಲ್ಲದ
ಓ ಕತ್ತಲೆ,
ಬೆಳಕಿನನುಪಸ್ಥಿತಿಯಲಷ್ಟೇ
ನಿನ್ನ ನೆಲೆ!

Tuesday, December 10, 2013

ನನ್ನ ಮಗಳು ಸುಷ್ಮ ಸಿಂಧುಗೆ `ಯೂಥ್ ಫೆಸ್ಟ್' ನಲ್ಲಿ ಪ್ರಶಸ್ತಿ ಪತ್ರ

ನನ್ನ ಮಗಳು ಸುಷ್ಮ ಸಿಂಧು `ವಿಶ್ವ ಮಾನಸಿಕ ಆರೋಗ್ಯ ದಿನ-೨೦೧೩'ರ ಪ್ರಯುಕ್ತ ಏರ್ಪಡಿಸಿದ್ದ ಮೂರೂ ಸ್ಪರ್ಧೆಗಳಲ್ಲಿಯೂ ಕ್ರಮವಾಗಿ ೧, ೨ & ೩ನೇ ಸ್ಥಾನಗಳಲ್ಲಿ ವಿಜೇತಳಾದ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ. ದಿನಾ೦ಕ:೦೯-೧೨-೨೦೧೩ರ೦ದು ನಿಮ್ಹಾನ್ಸ್, ಬೆ೦ಗಳೂರು, ಇಲ್ಲಿ ನಡೆದ `ಯೂಥ್ ಫೆಸ್ಟ್' ನಲ್ಲಿ ಈ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. 


Sunday, December 8, 2013

ಹನಿ `ಉನ್ನತಿ-ಅವನತಿ'

ಉನ್ನತಿ-ಅವನತಿ
ಏರುವುದು
ಪ್ರಯತ್ನಪೂರ್ವಕ
ಪ್ರಯಾಸದಾಯಕ,
ಇಳಿವುದೋ
ತತ್ ಕ್ಷಣದ ರೋಚಕ
ಅಧಃಪತನದಾಯಕ!

Wednesday, December 4, 2013

ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:

ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ-  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:
 *ಸಮಾರಂಭದ ನಡೆದ `ನಯನ ಸಭಾ೦ಗಣ' ವನ್ನು ಸೇರಿದಾಗ ಡಾ. ಕೃಷ್ಣಮೂರ್ತಿಯವರ ಭೇಟಿಯಾಯಿತು. ಅವರ ಸರಳ ಸಜ್ಜನಿಕೆಗೆ ನಮನಗಳು.

* ವೇದಿಕೆಯ ಮೇಲೆ ಆಹ್ವಾನಿತರು:





* ಹೂಗುಚ್ಛದೊ೦ದಿಗೆ ಸ್ವಾಗತ:




* ಜ್ಯೋತಿ ಬೆಳಗಿದ ಹೊತ್ತು:





* ಪ್ರಶಸ್ತಿಯನ್ನು ಪಡೆದ ಕ್ಷಣ:













* ಮನಸಿನ ಮಾತು: