Friday, July 24, 2015
Sunday, July 19, 2015
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ:
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೨೦೧೪--೧೫ ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡಾ೧೦೦ ಅ೦ಕ ಪಡೆದ ವಿದ್ಯಾರ್ಥಿಗಳಿಗೆ `ಪ್ರತಿಭಾ ಪುರಸ್ಕಾರ' ಮತ್ತು ಕನ್ನಡದಲ್ಲಿ ಪಿ.ಹೆಚ್.ಡಿ.ಪಡೆದವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದು ಕಾರ್ಯಕ್ರಮವು ದಿನಾ೦ಕ:೧೮-೭-೨೦೧೫ರ೦ದು ನಡೆಯಿತು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ನಿರ್ವಹಿಸಲು ನನ್ನನ್ನು ಆಹ್ವಾನಿಸಿದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜನಾರ್ಧನ್ ರವರು, ಗೌರವ ಕಾರ್ಯದರ್ಶಿಯವರಾದ ಗೊರೂರು ಶಿವೇಶ್ ರವರು ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ,
Monday, July 13, 2015
Monday, July 6, 2015
ಹಗ್ಗ
ಹೊಸೆಯುತ್ತಿದ್ದಾನೆ ಈತ ಹಗ್ಗವ
ಹೊಸೆದ ಭಾಗವ ಕಾಲಿನಿಂದ ಮೆಟ್ಟಿ
ಆಗಾಗ ಪರೀಕ್ಷಿಸುತ್ತಾ ಗಟ್ಟಿತನವ
ಉಡಿಯುತ್ತಲೇ ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ ಕೊಳೆಯಿಸಿ
ಸಿದ್ಧಗೊಳಿಸಿದ ಕಸುಬು
ಆಗಾಗ ಪರೀಕ್ಷಿಸುತ್ತಾ ಗಟ್ಟಿತನವ
ಉಡಿಯುತ್ತಲೇ ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ ಕೊಳೆಯಿಸಿ
ಸಿದ್ಧಗೊಳಿಸಿದ ಕಸುಬು
ಅಲ್ಲಲ್ಲಿ ತೆಂಗಿನ ಜುಂಗು
ಈಗೀಗ ಸಂಶ್ಲೇಶಿತ ನಾರು
ಎಂದೂ ಮುಗಿಯದ
ಕಾರುಬಾರು
ಆದಿಯಿಲ್ಲದ ಈ ಹಗ್ಗ
ಚಾಚುತಿದೆ ಅನಂತಕೆ
ಜೀಗುವುದಷ್ಟೇ
ಕಸುಬುಗಾರಿಕೆ!
ಅಂದು
ತೂಗುತೊಟ್ಟಿಲಾಗಿದ್ದು
ಜೀವಜಂತುಗಳಿಗೆ
ಉರುಲೂ ಆಗಿದೆ ಇಂದು
ಅಪರಾಧಿ ನಿರಪರಾಧಿಗಳಿಗೆಲ್ಲಾ
ಆಕಾಶಕ್ಕೇರಿಸುವ
ನೂಲು ಏಣಿ
ಪ್ರಪಾತದತ್ತ
ಹಾರಲೂ ಅಣಿ!
ಸುತ್ತ ಸೆಳೆಯುತಿದೆ
ಎಲ್ಲರನೂ ತನ್ನತ್ತ
ಅಲ್ಲಲ್ಲೆ ನಿರ್ಮಿತ
ದಾಟಲಾರದ ವೃತ್ತ
ಸ್ಪೋಟಗೊಳ್ಳುತಲೇ ಇದೆ
ಅತೃಪ್ತಿ
ಹಗ್ಗಕಿದರ ಎಗ್ಗೇ ಇಲ್ಲ
ಉದ್ದುದ್ದ ಬೆಳೆಯುತ್ತಲೇ ಇದೆ
`ಕೊಳೆ’ಯನೇ ಮೆತ್ತಿಕೊಳ್ಳುತ್ತಾ...
ಆಸ್ವಾದಿಸುತ್ತಾ...
Thursday, July 2, 2015
Subscribe to:
Posts (Atom)