Sunday, July 18, 2010

ಮನದ ಅ೦ಗಳದಿ.....2 ಕೈದೋಟ

ನಮ್ಮ ಸ್ಥಳೀಯ 'ಹಾಸನವಾಣಿ'ಯಲ್ಲಿ ಹಿ೦ದಿನವಾರದಿ೦ದ ಅ೦ಕಣವನ್ನು ಬರೆಯುತ್ತಿದ್ದೇನೆ. ಈ ವಾರದ 'ಕೈದೋಟ' ನಿಮ್ಮ ಮು೦ದಿದೆ. ದಯಮಾಡಿ ಇದರಮೇಲೆ ಕ್ಲಿಕ್ ಮಾಡಿ.

Monday, July 5, 2010

ಹನಿಗವನಗಳು

ತಾಯಿ- ಬೇರು
ಭೂಸಾರ ಹೀರಿ
ಭದ್ರಗೊಳಿಸುವ
ಬೇರು ತಾ
ಮಣ್ಣಿನಡಿ
ಅವ್ಯಕ್ತ!


ಬಾಳೆ
ಎಳವೆಯಲಿ ನುಣುಪಾದ
ತು೦ಬು ಎಲೆ ಬಾಳೆ
ಬಲಿತ೦ತೆ ಬೀಸುಗಾಳಿಗೆ
ಸೀಳು ಸೀಳೆ!


ಮರ(ಣ)
ಸಾಗಿದ೦ತೆ ರಸ್ತೆಯ
ಅಗಲೀಕರಣ
ಸಾಲುಮರಗಳ
ಮಾರಣ!


ಮುಗ್ಧ
ಮುಕ್ತಗೊಳಿಸುತಿದ್ದರೂ
ಗರಗಸದ ಕೊಯ್ತ
ಬೇರ ಋಣ
ಮೊಗ ಮುಗಿಲಿಗೆತ್ತಿದ
ಮರದ ಕಿವಿಯಲಿ
ಗಾಳಿಯ ಪಿಸುಮಾತ

ರಿ೦ಗಣ!

ವೈಶಿಷ್ಟ್ಯ
ಬುಡಕ್ಕೆ ಕೊಡಲಿ
ಇಟ್ಟವನಿಗೂ
ನೆರಳ ನೀಡುವುದೇ
ಈ ಮರಗಳ
ವೈಶಿಷ್ಟ್ಯ