Wednesday, May 15, 2013

ಸೆಳೆತ


 ಆ ಮರ.....
ಬೇರ ಭುವಿಯೊಳಗಿಳಿಸಿದ್ದರೂ
ಮೊಗ ಮುಗಿಲಿಗೆತ್ತಿ
ಪಡೆಯುತಿದೆ ಪರಮಾನಂದ,
ಮಾನವನಿಗೋ.....
ಪಾದವೆತ್ತಲು ಪ್ರಯತ್ನಿಸಿದಷ್ಟೂ
ಪೀಡಿಸಿ ಕೆಳ ಸೆಳೆವ
ಗುರುತ್ವಬಂಧ!

2 comments:

  1. ನಿಜವಾದ ಮಾತು, ಅದು ಊರ್ಧ್ವ ಮುಖಿ ಬೆಳವಣಿಗೆ ಹವಣಿಕೆ. ನಮ್ಮದು ಬರೀ ಭೂಗತ ಹಂಬಲ ಮತ್ತು ಹಾಲುಬುವಿಕೆ.

    ReplyDelete
  2. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿಯವರೆ, ನಾವು ಕಾರ್ಯಪ್ರವೃತ್ತ ರಾಗದೇ ಹಲುಬುವುದರಲ್ಲೇ ಕಾಲಕಳೆಯುತ್ತೇವೆನ್ನುವುದು ಸತ್ಯವಾದ ಮಾತು.

    ReplyDelete