Sunday, March 17, 2024

ʼಹಚ್ಚೆ ದಿನ್' ಪುಸ್ತಕ ಪರಿಚಯ 'ಜನ ಮಿತ್ರ' ಪತ್ರಿಕೆಯಲ್ಲಿ🌼

 ಸುಮಾ ರಮೇಶ್ ಅವರ ಲಲಿತ ಪ್ರಬಂಧ ಗಳ ಸಂಕಲನ ʼಹಚ್ಚೆ ದಿನ್'  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼




         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ ದಿನ್‌ʼ  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼


         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ

No comments:

Post a Comment