ಆಗಿದೆ
ಶವಸಂಸ್ಕಾರ
ಅಸ್ಥಿ ಸಂಚಯನ
ಆಗಬೇಕಿನ್ನೂ
ಪುಣ್ಯ ತೀರ್ಥಗಳಲ್ಲಿ
ಅಲೆಯುವುದಾಗಿದೆ
ಹೊತ್ತು
ಎಲುಬುಗಳ
ಮಡಕೆಯ
ಶುದ್ಧ ಸಲಿಲವನರಸುತ್ತಾ
[ಹರಿವ ನೀರಿಗೆ
ಮೈಲಿಗೆ ಇಲ್ಲವಂತೆ!]
ಹಿಂದೊಮ್ಮೆ
'ಪವಿತ್ರ ನದಿ'
ಎನಿಸಿದವುಗಳಿಗೂ
ಧರಿಸಲಾಗುತ್ತಿಲ್ಲ
ಸತ್ಯದ ಎಲುಬುಗಳ
ತಮ್ಮೊಳಗೆ
ಅಂತ್ಯವಿಧಿಗಳ
ಪೂರೈಸದೆ
ಇರಲಾದೀತೆ?
ಕುಟ್ಟಿ ಪುಡಿಮಾಡಿ
ಮೂಳೆಗಳ
ಹರಡಿಬಿಟ್ಟರೆ ಹೇಗೆ
ಭುವಿಯ
ಒಡಲೊಳಗೆಲ್ಲಾ?
ಹಿಂದೊಮ್ಮೆ
ಮಣ್ಣುಪಾಲಾದ
ಮಾನವೀಯತೆಯ
ತುಣುಕಾದರೂ
ಅಂಟಿ
ಮೊಳೆಯಬಹುದೇನೊ
ಸಲ್ಲುವಂತಿದ್ದರೆ ಸಾಕು
'ಸಾಪೇಕ್ಷ ಸತ್ಯ'
ಈ ಕಾಲಕ್ಕೆ!
tumba chennagide... istavaytu
ReplyDeletechennagide saalugalu...
ReplyDeleteಚೆಂದದ ಸಾಲುಗಳು...
ReplyDeleteಕವನ ಚನ್ನಾಗಿದೆ.ಅರ್ಥ ಮತ್ತು ಅ೦ತರ೦ಗದ ವಿಸ್ತಾರ ವಿಶಾಲವಾಗಿದೆ .
ReplyDeleteThis poem has all essence of real poetry. lines are so effictive on its base. gr8
ReplyDeleteawesome poem! shows the true picture of life. very nice.
ReplyDeletevery nice Poem.. liked it.
ReplyDeleteNice !
ReplyDeleteಚಂದದ ಸಾಲುಗಳ ಸಂಸ್ಕಾರ ...
ReplyDeleteತಿಳಿಸಿದೆ ಹಲವು ವಿಚಾರ .
Very nice!
ReplyDelete